ಭಾರತದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ದಿನದ ಶುಭಾಶಯಗಳು
ಸ್ವಾತಂತ್ರ್ಯೋತ್ಸ ದಿನಾಚರಣೆಯ ಶುಭದಿನ, ಶುಭ ವರ್ಷ ಎಲ್ಲರಿಗೂ ಅಭಿವೃದ್ಧಿಯ ವರ್ಷವಾಗಲಿ,
ನಮ್ಮ ದೇಶದ ಸಿಪಯಿಗಳು, ನಮ್ಮ ಜನ, ನಮ್ಮ ಯುವ ಜನತೆ, ನಮ್ಮ ಶಕ್ತಿ, ನಮ್ಮ ಸಹಾಯ, ನಮ್ಮ ಸಹಕಾರವನ್ನು ಈ ದೇಶದ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಗುವುದು ನಮ್ಮ ನಿಮ್ಮಲ್ಲರ ಕರ್ತವ್ಯವಾಗಿರುತ್ತದೆ.
ನಮ್ಮ ಅವಶ್ಯಕತೆಗಾಗಿ ಇತರರ ಜೊತೆ ಬೆಳೆಸುವ ಸಂಬಂಧ ಬಹಳ ಕಾಲ ಬಾಳಲ್ಲ, ಸ್ವಂತ ಅವಶ್ಯಕತೆ,
ಅನಿವಾರ್ಯತೆ ಇದ್ದಾಗ ಮಾತ್ರ ಪ್ರೀತಿಸುವ ಸಂಬಂಧವೂ ಬಹಳ ಕಾಲ ಉಳಿಯಲ್ಲ .
ಆದರೆ ಸ್ವಾರ್ಥ ವಿಲ್ಲದ ನಿಸ್ವಾರ್ಥ ಸೇವೆಯ ಕುಟುಂಬ, ಸ್ನೇಹ ಮತ್ತು ಮಾಡಿದ ಸಹಾಯ ಅಜೀವ ಪರ್ಯಂತ ನಿಲ್ಲುತ್ತದೆ.
ಜೀವ ನಮ್ಮ ಮಾತನ್ನು ಕೇಳುವುದಿಲ್ಲ. ಯಾವಾಗ ಬೇಕಾದರೂ ಹಾರಿ ಹೋಗಬಹುದು, ಜೀವನ ನಮ್ಮ ಮಾತನ್ನು ಕೇಳುತ್ತದೆ.
ಒಬ್ಬರ ಮನ ನೋಯಿಸಲು
ನಿಮಿಷ ಸಾಕು,ಆದರೆ ಆ ಒಂದು ಮನಸ್ಸನ್ನು ಸರಿಪಡಿಸಲು ವರ್ಷಗಳೇ ಬೇಕು.
ವಾದವಿರುವ ಮಾತಿಗಿಂತ
ಸ್ವಾದವಿರುವ ಮೌನವೇ
ಉತ್ತಮ......
ಎಲ್ಲರ ಪ್ರೀತಿಗೆ ಪಾತ್ರರಾಗುವುದಕ್ಕಿಂತ ಎಲ್ಲರ ನಂಬಿಕೆಗೆ ಪಾತ��ರರಾಗಲು ಪ್ರಯತ್ನಿಸಬೇಕು.
ನಂಬಿಕೆಗೆ ಪಾತ್ರರಾದರೆ ಪ್ರೀತಿಗೆ ಪಾತ್ರರಾಗುವುದು ಸುಲಭವಾಗುತ್ತದೆ. ನಂಬಿಕೆ ಕಳೆದುಕೊಂಡರೆ ಯಾರೂ ಪ್ರೀತಿಸುವುದಿಲ್ಲ, ಗೌರವಿಸುವುದಿಲ್ಲ. ನಂಬಿಕೆ ಆಧರಿತ ದೇಶ ಕಟ್ಟಬೇಕು.
ಎಲ್ಲಾ ಧರ್ಮದ ದೇವರಲ್ಲಿ ಒಂದೇ ಬೇಡಿಕೆ ದೇಶದ ಜನತೆಯಲ್ಲಿ ಶಾಂತಿ, ಸಹನೆ, ಸಹೋದರತೆ, ಸಹಕಾರ, ಸಮಗ್ರ ಅಭಿವೃದ್ಧಿಯ ಮುಖಗಳಲ್ಲಿ ನಗು
ಸದಾ ಇರಲಿ...........
"ಅಭಿವೃದ್ಧಿ ಎಂಬುದು ಮಾನಸಿಕವಾಗಿ ಹಾಗೂ ಕಾರ್ಯರೂಪದಲ್ಲೂ ವ್ಯಕ್ತವಾಗುವ ಅಗತ್ಯವಿದೆ.
ಜನರ ಹಿತಾಸಕ್ತಿ ಕಾಪಾಡಲು, ಅದರಲ್ಲಿ ಬಡತನ ನಿವಾರಣೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಅಗತ್ಯವಿರುತ್ತದೆ.
ಮುಖ್ಯವಾಗಿ ಉದ್ದೇಶ ಪೂರ್ವಕವಾಗಿ ಸಮಾಜಿಕ ನ್ಯಾಯ ಒದಗಿಸುವ ಮೂಲಕ ರಾಷ್ಟ್ರದ ಸರ್ವತೊಮುಖ ಅಭಿವೃದ್ಧಿಗೆ ದಾರಿ ದೀಪವಾಗ ಬೇಕು
ಕರ್ನಾಟಕ ರಾಜ್ಯದ ನೂತನವಾಗಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಸನ್ಮಾನ್ಯ ಶ್ರೀಯುತ ಸಿದ್ದರಾಮಯ್ಯರವರಿಗೆ ಹಾಗೂ ಉಪಮುಖ್ಯಮಂತ್ರಿಯಾಗಿ ಸನ್ಮಾನ್ಯ ಶ್ರೀಯುತ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಸಂಪುಟದ ಎಲ್ಲಾ ಸಚಿವರುಗಳಿಗೆ ಹಾರ್ದಿಕ ಅಭಿನಂದನೆಗಳು💐@siddaramaiah @DKShivakumar @KPCCKarnataka
ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ಜಾತಿ,ದುಡ್ಡು, ಪ್ರಭಾವಿ ಹಿನ್ನೆಲೆ ಇಲ್ಲದ ಸಾಮಾನ್ಯ ಕುಟುಂಬದಿಂದ ಬಂದವರು ಇವತ್ತಿನ ಚುನಾವಣೆಯಲ್ಲಿ ಸ್ಪರ್ಧಿಸುವ ಮಟ್ಟಕ್ಕೆ ಬರಲು ಖಂಡಿತ ಆಗುತ್ತಿರಲಿಲ್ಲ.
ಅನೇಕರಿಗೆ ರಾಜಕೀಯ ಬದುಕು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ. ಸಂವಿಧಾನ ನನ್ನ ಧರ್ಮ, ಅದನ್ನು ರಕ್ಷಿಸುವುದು ಮತ್ತು ಡಾ.ಅಂಬೇಡ್ಕರ್ ಅವರನ್ನು ಗೌರವಿಸುವುದು ನನ್ನ ಕರ್ತವ್ಯ.
ಸಂವಿಧಾನ ವಿರೋಧಿಗಳನ್ನು ಸೋಲಿಸಿ,
ದೇಶವನ್ನು ಗೆಲ್ಲಿಸಿ.
ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಭೀಮರಾವ್ ರಾಮ್ಜೀ ಅಂಬೇಡ್ಕರ್ ಜಯಂತಿಯ ಶುಭಶಾಯಗಳು.
ಸಮಾಜಿಕ ಕಾರ್ಯ ದಕ್ಷತೆ ಇಲ್ಲದ ಯಾವುದೇ ಕಾರ್ಯ ಕ್ಷೇತ್ರದಲ್ಲೂ ಪ್ರಗತಿ ಸಾಧ್ಯವಿಲ್ಲ.
ಪ್ರಸ್ತುತ ಚುನಾವಣಾ ಸಂಧರ್ಭದಲ್ಲಿ ಇವರ ಜನ್ಮದಿನದಂದು ನಾವು ಸಂಕಲ್ಪ ಮಾಡುವ
ಪ್ರಜಾಪ್ರಭುತ್ವವಾಗಿ ರಾಜಕೀಯ ಪ್ರಜಾಪ್ರಭುತ್ವ, ಸಾಮಾಜಿಕ ಸಮಾನತೆಗೆ ಅನ್ವಯಿಸುವ ಸಾಮಾಜಿಕ ಪ್ರಜಾಪ್ರಭುತ್ವ, ಮತ್ತು ಸಮಾಜವಾದಿ ಆರ್ಥಿಕತೆಯುಳ್ಳ ಆರ್ಥಿಕ ಪ್ರಜಾಪ್ರಭುತ್ವ. ಇವು ಮೂರು ತಮ್ಮ ಆದರ್ಶ ಸಮಾಜದ ಸ್ವರೂಪವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳಿಗೆ ಸಮಾಜಿಕ ನ್ಯಾಯ ನೀಡುವ ಬದ್ಧತೆ ಇಲ್ಲದ ಪಕ್ಷಗಳಲ್ಲಿ ಸಮಾಜ ಪ್ರಗತಿಯ ಹಾದಿಯಲ್ಲಿ ಇರುವುದಿಲ್ಲ.
ಹಸಿದ ಜೀವಿಗಳಾ ಕೈಗೆ ಕೋಮು ವಾದದ ವಿಷ ಬೀಜ ಬಿತ್ತಿ ಶೋಷಿತರ ಬದುಕುವ ಹಕ್ಕುಗಳನ್ನು ರಕ್ಷಿಸಲು ರಚಿತವಾದ ಸಂವಿಧಾನ ನಾಶ
(ಕೆಲವು ಕೇಂದ್ರ ಸರ್ಕಾರದ ಸಚಿವರೆ ಹೇಳಿಕೆ ನೀಡಿದರು) ಮಾಡಲು ಹೊರಟಿರುವ ಬಿ.ಜೆ.ಪಿ. ಪಕ್ಷದ ಚಿಂತನೆಯ ಅಪಾಯಗಳನ್ನು ತಿಳಿದು ನಾವು ನೀವು ಅರಿಯಬೇಕಾದ ಅವಶ್ಯಕತೆ ಇದೆ .
ಶೋಷಿತರ ಆರ್ಥಿಕ ಸಬಲೀಕರಣಕ್ಕೇ ಅನನ್ಯ ಚಿಂತನೆಗಳನ್ನು ಸಮಾಜದ ಮುಂದಿಟ್ಟಿದ ಅಂಬೇಡ್ಕರ್ ರವರ ಮಾರ್ಗದರ್ಶನದಲ್ಲಿ ಚಿಂತನೆ ನಡೆಸಿ ಮುಂದೆ ಹೋಗುವುದು ನನ್ನ ಪ್ರಕಾರ ಒಂದು ಆದರ್ಶ ಸಮಾಜ ಎಂದರೆ ಅಲ್ಲಿ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಇರಬೇಕು,ಅದು ಚಲನಶೀಲವಾಗಿರ ಬೇಕು.
ಅದರಿಂದ ನಾವು ನೀವು ಎಲ್ಲರೂ ಸರಿಯಾದ ಮಾಹಿತಿಯನ್ನು ಅರಿವಿಗೆ ತಂದು ಕೊಂಡು ಸರ್ವರಿಗೂ ಸಮಪಾಲು ಸಮಬಾಳು ಎಂಬ ಮಾತಿನಂತೆ ನಮ್ಮ ರಕ್ಷಣೆಗೆ ಮತ್ತು ನಮ್ಮಗೆ ಸಮಾನಾಂತರ ಅವಕಾಶ ನೀಡುವ ಪಕ್ಷಗಳಿಗೆ ಮತ ನೀಡಿ, ನಮ್ಮ ಸಮಾಜ ಸಮುದಾಯದಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರಯತ್ನಿಸೋಣ.
ರಂಗಭೂಮಿ (ಥಿಯೇಟರ್)ಎಂದರೆ, ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ, ಸಾಹಿತ್ಯ ಕೃತಿಯಾಗಿ , ರಂಗಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಜಗತ್ತಿನಾದ್ಯಂತ ಅಯಾ ಜನಾಂಗ,ದೇಶ,ಪ್ರದೇಶಗಳ ರಂಗಭೂಮಿ ರೂಪುಗೊಂಡುದುದನ್ನು ನಾವು ಕಾಣಬಹುದು.
ಕನ್ನಡದ ಆದ್ಯ ವಚನಾಕರ ಸಂತ ಶ್ರೀ ದೇವರ ದಾಸಿಮಯ್ಯ ಜಯಂತಿ ಶುಭಾಶಯಗಳು.
ದೇವರ ದಾಸಿಮಯ್ಯ ಸಮಾಜದ ಮೌಢ್ಯತೆ, ಸಾಮಾಜಿಕ ಅಸಮಾನತೆ,ಮೇಲು-ಕೀಳು ಮನೋಭಾವಗಳನ್ನು ಕಿತ್ತೊಗೆದು ಅಂಧಕಾರದ ಕತ್ತಲೆಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯು ಅನ್ಯಾಯಕ್ಕೊಳಗಾದ ರೀತಿಯಲ್ಲಿ ಸಾಮಾಜಿಕ ನ್ಯಾಯದ ಸಮಾನತೆಯ ಜ್ಞಾನದ ಬೆಳಕಿನಡೆಗೆ ಕೊಂಡೊಯ್ಯುವಲ್ಲಿ ಶ್ರಮಿಸಿದ ಕನ್ನಡದ ಕ್ರಾಂತಿಕಾರಿ ಮೊದಲ ವಚನಕಾರರ ಜಯಂತಿಯ ಶುಭಾಶಯಗಳು.
ಸಮಾಜದ ಕ್ರಾಂತಿಕಾರಿ ಸುಧಾರಣೆಯ ಕನ್ನಡ ವಚನಗಳ ಬ್ರಹ್ಮ ದೇವರ ದಾಸಿಮಯ್ಯ
ಸಾಮಾಜಿಕವಾಗಿ ಸಮಾಜಗಳ ಅಂಕು ಡೊಂಕುಗಳನ್ನು ಸಮಾಜದ ಸುಧಾರಣೆಗೆ ತಮ್ಮ ವಚನಗಳಲ್ಲಿ ಸರಳವಾಗಿ ಸಾಮಾನ್ಯ ಜನತೆಗೆ ತಿಳಿಸಿ ಅದನ್ನು ಪಾಲನೆ ಮಾಡುವ ಹಾಗೆ ಕ್ರಾಂತಿ ಮಾಡಿದ ವಚನಕಾರರು ಇವರ ವಚನಗಳಿಗೆ ಮಾರುಹೋಗಿ ಭಕ್ತಿ ಭಂಡಾರಿ ಬಸವಣ್ಣನವರು ಇವರ ಅನುಯಾಯಿಗಳಗಿ ಅವರ ಪ್ರೇರಣೆಯಿಂದ ಅವರಿಂದ ಪ್ರಭಾವಿತರಾಗಿ ಅವರ ಹಾದಿಯಲ್ಲಿ ವಚನಗಳಲ್ಲಿ ಮುಂದುವರೆದರು ,
ಶ್ರೀ ದೇವರ ದಾಸಿಮಯ್ಯನವರು ಕರ್ನಾಟಕ ರಾಜ್ಯದ ಪ್ರಸಿದ್ಧ ಆದ್ಯ ಕನ್ನಡ ವಚನಾಕರರ ಗುರುಗಳಲ್ಲಿ ಒಬ್ಬರು.
👇
🅿️
ಓದಲು ಈ ಕೆಳಗಿನ ಲಿಂಕ್ ಬಳಸಿ
ನಿಮ್ಮ ಸಹಕಾರಿ ಮಿತ್ರ
ರಾಜಾಧ್ಯಕ್ಷರು :
ಕರ್ನಾಟಕ ರಾಜ್ಯ ನೇಕಾರ ಸಂಘ
ಎಣ್ಣೆಗೆರೆ ಆರ್. ವೆಂಕಟರಾಮಯ್ಯ
Facebook page ಗೆ login ಆಗಿ ಲೈಕ್ ಕೊಡಿ,
REQUEST TO LIKE, COMMENTS AND SHARE TO EVERY PERSON FAMILY AND FRIENDS.
ಇಂದು ವಿಶ್ವ ಟಿಬಿ ದಿನವಾಗಿದೆ, ಇಡೀ ವಿಶ್ವ ಇಂದು ಈ ದಿನವನ್ನು ಆಚರಿಸುತ್ತಿದೆ ಮತ್ತು ಟಿಬಿಯಿಂದ ದೂರವಿರುವುದು ಹೇಗೆ ಮತ್ತು ಟಿಬಿ ಆದರೆ ಯಾವ ಚಿಕಿತ್ಸೆ ಪಡೆಯಬೇಕು ಎಂದು ವಿಶ್ವಾದ್ಯಂತ ವಿಶ್ವ ಕ್ಷಯರೋಗ (ಟಿಬಿ ದಿನಾಚರಣೆ ಯ) ಕಾರ್ಯಕ್ರಮಗಳು ನಡೆಯುತ್ತಿವೆ.
ಕ್ಷಯರೋಗವು (TB) ಸೋಂಕಿ ನಿಂದ ಬರುವ ರೋಗ. ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೊಸಿಸ ನಿಂದ ಬರುವುದು.
ಹರಡುವುದು ಕ್ಷಯರೋಗವನ್ನು ರೋಗಿಯು ಗಾಳಿಯ ಮೂಲಕ ಹರಡಬಹುದು. ಒಬ್ಬನು ಒಂದು ವರ್ಷದಲ್ಲಿ 10 ಜನಕ್ಕೆ ಸೋಂಕು ತಗಲಿಸಬಹುದು.
ಹವಾಮಾನವು ಜನರ ದೈನಂದಿನ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಹವಾಮಾನ ಚೆನ್ನಾಗಿದ್ದರೆ ಜನರು ಉಲ್ಲಸಿತರಾಗಿರುತ್ತಾರೆ, ಕೆಟ್ಟ ಹವಾಮಾನವಿದ್ದರೆ ಅವರ ದಿನನಿತ್ಯದ ಕೆಲಸಗಳು ವ್ಯತ್ಯಯವಾಗುತ್ತವೆ. ಒಂದು ಪ್ರದೇಶದ ಹವಾಮಾನ ಆ ಪ್ರದೇಶದ ಜನವಸತಿ, ಕೃಷಿ, ಉದ್ಯಮ, ಕೈಗಾರಿಕೆ ಇತ್ಯಾದಿಗಳನ್ನು ನಿರ್ಧರಿಸುತ್ತದೆ. ಹವಾಮಾನ ಚೆನ್ನಾಗಿದ್ದರೆ ಆ ಪ್ರದೇಶದಲ್ಲಿ ಹೆಚ್ಚು ಜನರು ಬಂದು ನೆಲೆಸುತ್ತಾರೆ. ಜನರು ಹೆಚ್ಚಿದ್ದಷ್ಟು ಅಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ. ಒಂದು ಪ್ರದೇಶದ ಹವಾಮಾನ ಮಾನವ ವಾಸಕ್ಕೆ ಪ್ರತಿಕೂಲವಾಗಿದ್ದರೆ ಅಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ. ಅಲ್ಲಿ ಮಾನವರ ವಾಸವಂತು ಇನ್ನೂ ದೂರದ ಮಾತು. ಆದ್ದರಿಂದ ಹವಾಮಾನವನ್ನು ಆಧರಿಸಿಯೇ ಒಂದು ಪ್ರದೇಶದ ಆರ್ಥಿಕ, ಸಾಮಾಜಿಕ ಪ್ರಗತಿ ನಿರ್ಧಾರವಾಗುತ್ತವೆ. ಯುರೋಪ್ ರಾಷ್ಟ್ರಗಳಲ್ಲಿ ಹವಾಮಾನ ಕ್ಷ ಣ ಕ್ಷ ಣಕ್ಕೆ ಬದಲಾಗುವುದರಿಂದ ಅಲ್ಲಿ ಹವಾಮಾನ ವರದಿಗಳಿಗೆ ತುಂಬಾ ಆದ್ಯತೆ ನೀಡಲಾಗಿದೆ. ಭಾರತದಲ್ಲಿ ಆಯಾ ಹವಾಮಾನವನ್ನು ಅವಲಂಬಿಸಿ ವಿವಿಧ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಹವಾಮಾನಕ್ಕೆ ಇರುವ ಈ ಮಹತ್ವವನ್ನು ಗಮನಿಸಿಯೇ ಇದಕ್ಕೂ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಆ ದಿನವೇ ಮಾರ್ಚ್ 23. ಈ ದಿನವನ್ನು ವಿಶ್ವ ಹವಾಮಾನ ದಿನ ಎಂದು ಆಚರಿಸಲಾಗುತ್ತದೆ.
2016ನೇ ಸಾಲಿನ ಘೋಷವಾಕ್ಯವೆಂದರೆ, “ಬಿಸಿ, ಒಣ ಹಾಗೂ ತೇವಾಂಶ; ಭವಿಷ್ಯವನ್ನು ಎದುರಿಸಿ” ಎನ್ನುವುದು ಆಗಿತ್ತು.
ಹವಾಮಾನ ಬದಲಾವಣೆಯಿಂದ ಆಗುವ ವ್ಯತ್ಯಯಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.
ನೈಸರ್ಗಿಕ ಹವಾಮಾನ ವಿಧಾನ ಹಾಗೂ ಈಗ ಆಗಿರುವ ಬದಲಾವಣೆ, ಬದಲಾವಣೆಯ ವೇಳೆ ಬಗ್ಗೆ ಇದು ಜಾಗೃತಿ ಮೂಡಿಸಲಿದೆ.
ಅಧಿಕ ಬಿಸಿಗಾಳಿ, ಬರ ಪರಿಸ್ಥಿತಿ ಹಾಗೂ ಅತಿವೃಷ್ಟಿಯ ಸಮಸ್ಯೆಗಳು ಇದರಿಂದ ಉಂಟಾಗುತ್ತವೆ.
ವಿಶ್ವ ಹವಾಮಾನ ದಿನಾಚರಣೆ ಅಂಗವಾಗಿ, ಹವಾಮಾನ ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ನೀಡಿದ ಹಲವು ಮಂದಿಯನ್ನು ಸನ್ಮಾನಿಸಲಾಗಿದೆ.
ಇವುಗಳಲ್ಲಿ ಪ್ರಮುಖ ಪ್ರಶಸ್ತಿಗಳೆಂದರೆ, ಅಂತರರಾಷ್ಟ್ರೀಯ ಹವಾಮಾನ ಸಂಸ್ಥೆ ಬಹುಮಾನ, ವಿಲ್ಹೊ ವೈಶಾಲಿಯಾ ಪ್ರಶಸ್ತಿ ಹಾಗೂ ನೊರ್ಬೆರ್ಟ್ ಗೆರ್ಬಿಯರ್ ಅಂತರರಾಷ್ಟ್ರೀಯ ಪ್ರಶಸ್ತಿ.
ಹಿನ್ನೆಲೆ:
1950ರ ಮಾರ್ಚ್ 23ರಂದು ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ ಅಸ್ತಿತ್ವಕ್ಕೆ ಬಂದ ದಿನವಾಗಿದೆ. ಮುಂದೆ 1951ರಲ್ಲಿ,
ವಿಶ್ವ ಹವಾಮಾನ ಸಂಸ್ಥೆಯು ವಿಶ್ವಸಂಸ್ಥೆಯ ವಿಶೇಷ ಉದ್ದೇಶದ ಸಂಸ್ಥೆಯಾಗಿ ಸೇರ್ಪಡೆಗೊಂಡಿತು. ಇದು ಹವಾಮಾನ, ಜೈವಭೌಗೋಳಿಕ ವಿಜ್ಞಾನ ಹಾಗೂ ಆಪರೇಷನಲ್ ಹೈಡ್ರಾಲಜಿ ವಿಷಯಗಳ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವ ಕಾರ್ಯವನ್ನು ಮಾಡುತ್ತಾ ಬಂದಿದೆ.
ಹವಾಮಾನವು ವಾತಾವರಣದ ಸ್ಥಿತಿ, ಬಿಸಿ ಅಥವಾ ಶೀತಲ, ತೇವ ಅಥವಾ ಶುಷ್ಕ, ಶಾಂತ ಅಥವಾ ಬಿರುಗಾಳಿಯಿಂದ ಕೂಡಿದ, ನಿಚ್ಚಳ ಅಥವಾ ಮೋಡಕವಿದ ಅನ್ನುವಷ್ಟರ ಮಟ್ಟಿಗೆ. ಬಹುತೇಕ ಹವಾಮಾನ ವಿದ್ಯಮಾನಗಳು ಪರಿವರ್ತನ ಗೋಳದಲ್ಲಿ ಸಂಭವಿಸುತ್ತವೆ, ಸಮಗೋಳದ ಸ್ವಲ್ಪ ಕೆಳಗೆ. ಹವಾಮಾನವು ಸಾಮಾನ್ಯವಾಗಿ ದಿನನಿತ್ಯದ ಉಷ್ಣಾಂಶ ಮತ್ತು ಮಳೆ ಪ್ರಮಾಣವನ್ನು ನಿರ್ದೇಶಿಸಿದರೆ, ವಾಯುಗುಣವು ಸಮಯದ ದೀರ್ಘಾವಧಿಯಲ್ಲಿ ಸರಾಸರಿ ವಾತಾವರಣ ಸ್ಥಿತಿಗಳಿಗಾಗಿ ಬಳಸಲಾಗುವ ಪದ.
ಹವಾಮಾನ, ಇದು ಕಾಲೋಚಿತ ವಿಪರೀತಗಳ, ಬದಲಾವಣೆ ರೀತಿಯ ಸರಾಸರಿ ಹವಾಮಾನ, ಭೂಮಿಯ ಶಕ್ತಿ ಮತ್ತು ವಾಯುಮಂಡಲದಿಂದ ನಿಯಂತ್ರಣ ವಾಸ್ತವವಾಗಿ ಮಾನವ ಚಟುವಟಿಕೆಗಳು ಮತ್ತು ನೈಸರ್ಗಿಕ ಘಟನೆಗಳು ಎರಡೂ ಉಂಟಾಗುತ್ತದೆ ಆಗಿದೆ. ...
ಹವಾಮಾನ ಬದಲಾವಣೆ ಕುರಿತಾದ ಅಂತರರ���ಷ್ಟ್ರೀಯ ಮಂಡಳಿ ಪ್ರಕಾರ, ಹವಾಮಾನ ಬದಲಾವಣೆ ಗಮನಾರ್ಹವಾಗಿ ಮಾನವ ಚಟುವಟಿಕೆಗಳಿಂದ ಕಾರಣ, ಮತ್ತು ಈ ಭೂಮಿಯ ಮೇಲೆ ಬದಲಾಯಿಸಲಾಗದ ಪರಿಣಾಮಗಳನ್ನು ಉಂಟುಮಾಡುತ್ತವೆ. ಇದಲ್ಲದೆ, ನೈಸರ್ಗಿಕ ಘಟನೆಗಳು ಹವಾಗುಣದ ಬದಲಾವಣೆಯ ಅಂಶಗಳು.
ಜನರ ಸುರಕ್ಷೆ ಮತ್ತು ಕ್ಷೇಮಕ್ಕೆ ಹವಾಮಾನದ ಕೊಡುಗೆ ಅತ್ಯಂತ ಮಹತ್ವದ್ದು ಎಂಬುದನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷವೂ ಒಂದೊಂದು ಥೀಮ್ನಡಿಯಲ್ಲಿ ಈ ದಿನವನ್ನು ಸೆಲೆಬ್ರೇಟ್ ಮಾಡಲಾಗುತ್ತದೆ. ಈ ವರ್ಷದ ಥೀಮ್ ಅಂಡರ್ಸ್ಟ್ಯಾಂಡಿಂಗ್ ಕ್ಲೌಡ್ಸ್ ಎಂಬುದಾಗಿದೆ. ಹವಾಮಾನ ನಿರ್ಧರಿಸುವಲ್ಲಿ ಮೋಡಗಳ ಪಾತ್ರ ಮಹತ್ವದ್ದು ಹಾಗೂ ಇದರ ಅಧ್ಯಯನ ನಡೆಸುವ ಅಗತ್ಯತೆಯನ್ನು ಈ ದಿನ ಪ್ರತಿಪಾದಿಸುತ್ತದೆ.
ಭಾರತದ ಹವಾಮಾನ ಇಲಾಖೆಯ ಕೇಂದ್ರ ಕಛೀರಿ ಮಹಾರಾಷ್ಟ್ರದ ಪುಣೆಯಲ್ಲಿ ಇದೆ.