Viral Photo: ವೈರಲ್ ಆಗುತ್ತಿದೆ ಈ ಫೋಟೋ, ಡಾ.ಪುನೀತ್ ರಾಜ್ ಕುಮಾರ್ ಅವರನ್ನು ಹೋಲುವ ಅವಳಿ ಮಕ್ಕಳ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದೀಗ ಈ ಫೋಟೋವನ್ನು ನೋಡಿದಾಗ ನಮ್ಮ ಅಪ್ಪು ಅವರನ್ನು ನೋಡಿದಂತೆ ಆಗುತ್ತದೆ ಎಂದು ಅಭಿಮಾನಿ ಹೇಳಿಕೊಂಡಿದ್ದಾರೆ. #viralphoto #drpuneethrajkumar #appu #puneethrajkumarfans#karnataka, #kannadamovie, #Kalaburagi, #Koppal, #kannadafilm, #karnataka_focus, #karnatakaphotographers, #bangaloredays, #bangalore_insta, #yadgiri, #yadgiri, #shapur, #shapura, #kannadanews, #kannadanewspaper, #, #kannadareels, #kannadamusically, #kannadafilm, #kannadathi, #kannadadubsmash, #kannadamovies, #kannadatrolls, #kannada, #kannadaquotes, #kannadacinema, #kannadigaru, #kannadanewschannels, #kannadanewschannel, (at Bangalore, India) https://www.instagram.com/p/Cb26KOlPrWH/?utm_medium=tumblr
0 notes
ಸಿ. ಎಂ. ಇಬ್ರಾಹಿಂ ನಾಯಕತ್ವದಲ್ಲಿ ಮುಂದಿನ ಚುನಾವಣೆ: ಕುಮಾರಸ್ವಾಮಿ ಸಿ. ಎಂ. ಇಬ್ರಾಹೀಂ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆನ್ಸನ್ ಟೌನ್ನಲ್ಲಿರುವ ಸಿ ಎಂ ಇಬ್ರಾಹೀಂ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಬ್ರಾಹೀಂ ಅವರು ದೇವೇಗೌಡರ ಕುಟುಂಬದಲ್ಲಿ ಸಹೋದರನಂತೆ ಇರುವ ನಾಯಕ. ಈ ಹಿಂದೆ ಸಣ್ಣ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಅಲ್ಲದೆ, ಅವರ ರಾಜಕೀಯ ಜೀವನ ಕಾಕತಾಳೀಯ. ರಾಜ್ಯದ ಉದ್ದಗಲಕ್ಕೂ ದೇವೇಗೌಡರ ಜೊತೆ ಇಬ್ರಾಹಿಂ ಪಕ್ಷಕ್ಕೆ ದುಡಿದಿದ್ದರು ಎಂದು ನುಡಿದರು. ಇನ್ನೂ ಬೃಹತ್ ಸಮಾವೇಶ ಮಾಡಿ ಇಬ್ರಾಹಿಂ ಸೇರ್ಪಡೆ ಕಾರ್ಯಕ್ರಮ ಆಯೋಜಿಸುತ್ತೇವೆ. ಒಂದು ಕಡೆ ರಮಝಾನ್, ಮತ್ತೊಂದು ಕಡೆ ಯುಗಾದಿ. ಇದಾದ ಬಳಿಕ ಜನತಾ ಜಲಧಾರೆ ನಡೆಸುತ್ತೇವೆ. ಇದರ ಜವಾಬ್ದಾರಿಯನ್ನು ಇಬ್ರಾಹಿಂ ಪಡೆದುಕೊಳುತಾರೆ ಎಂದರು. (at Bangalore, India) https://www.instagram.com/p/Cb0KmFRPemx/?utm_medium=tumblr
0 notes
ಅಪ್ಪು ಸರ್ಗೆ ಡೈರೆಕ್ಷನ್ ಮಾಡಬೇಕು ಅಂತ ಆಸೆಯಿತ್ತು! ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ಮತ್ತು ನಟ ಉಪೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅಪ್ಪು ಸರ್ಗೆ ಡೈರೆಕ್ಷನ್ ಮಾಡಬೇಕು ಅಂತ ಆಸೆಯಿತ್ತು. ಅದು ಈಡೇರಲಿಲ್ಲ ಅಲ್ಲದೇ ಸಿನಿಮಾದಲ್ಲಿ ಪ್ರತಿಯೊಂದು ಪ್ರೇಮ್ ಲ್ಲೂ ಆ್ಯಕ್ಟಿಂಗ್ ನೋಡಿದ್ರೆ ಗೊತ್ತಾಗುತ್ತೆ. ಅವರು ಯಾಕೆ ದೇವರು ಅಂತ ಕರೆತ್ತಾರೆ ಅಂತ ಈಗ ಗೊತ್ತಾಗುತ್ತೆ ಎಂದು ಮಾತನಾಡಿದ್ದಾರೆ. #uppi #uppiboss #upendrauppi #upendrauppi (at Bangalore, India) https://www.instagram.com/p/CbpEqr1qpCQ/?utm_medium=tumblr
0 notes
DBOSS ENTRY IN TODAY IN KANAKAPURA FANS REACTION.. To know click the link below https://youtu.be/PAImLwcgIiw https://youtu.be/PAImLwcgIiw Pls do subscriber our channel & like for more updates ... #DBoss #dbossfans #dbosskingdom #dbosscraze #dbossfc #dbossquotes #dbossfan #dboss❤️ #dbossism #dbossfc #dbosssoldiers #dbossfanshonnavar #dbosskannada #dbossbirthdaycdp #dbos (at Kanakpura NH209) https://www.instagram.com/p/Cbm3dFov8HD/?utm_medium=tumblr
0 notes
ಬಿಜೆಪಿ ಬೂತ್ ಅಧ್ಯಕ್ಷರುಗಳ ಮನೆಗಳಿಗೆ ನಾಮಫಲಕ ಈ ದಿನ ಮಾರ್ಟಳ್ಳಿ ಶಕ್ತಿ ಕೇಂದ್ರದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರುಗಳ ಮನೆಗಳಿಗೆ ನಾಮಫಲಕ ಗಳನ್ನು ಹಾಕಲಾಯಿತು ಹಾಗೂ ಬೂತ್ ಕಮಿಟಿ, ಪೇಜ್ ಪ್ರಮುಖ್ ವಿಸ್ತಾರಕ್ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾದ ಡಾ. ಎಸ್. ದತ್ತೇಶ್ ಕುಮಾರ್, ಮಲೆ ಮಹದೇಶ್ವರ ಮಂಡಲ ಅಧ್ಯಕ್ಷರಾದ ವೀರಭದ್ರ, ಗ್ರಾಮದ ಮುಖಂಡರಾದ ಸಿಂಗ್ ರಾಯ್, ಶಿವಕುಮಾರ್, ಶಮಣಶ, ಸೆಂದಿಗಯ, ರಾಜ್ ಕುಮಾರ್, ಕುಮಾರ್, ಪಳಿನಿ, ಅಂತೋನಿಯಪ್ಪ, ಗೋಪಾಲ್, ಮಹದೇವಸ್ವಾಮಿ ಇನ್ನೂ ಮುಂತಾದ ಮುಖಂಡರುಗಳು ಉಪಸ್ಥಿತರಿದ್ದರು. (at Hanur) https://www.instagram.com/p/Cbl9x0sLARQ/?utm_medium=tumblr
0 notes
ಡೈರಿ ಅಧ್ಯಕ್ಷರಾಗಿ ಲಕ್ಷ್ಮಿ ಪ್ರಕಾಶ್ ಅವಿರೋಧ ಆಯ್ಕೆ ಕೆ. ಆರ್. ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾ ರ ಸಂಘಕ್ಕೆ ಅಧ್ಯಕ್ಷರಾಗಿ ಲಕ್ಷ್ಮಿ ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಆಡಳಿತ ಮಂಡಳಿ ಅವಧಿ ಮುಗಿದ ಹಿನ್ನಲೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿ ತ್ತು. ಅಧ್ಯಕ್ಷರ ಚುನಾವಣೆ ನಿಗದಿ ಹಿನ್ನಲೆ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿ ಪ್ರಕಾಶ್, ಉಪಾ ಧ್ಯಕ್ಷ ಸ್ಥಾನಕ್ಕೆ ಮಂಜುಳರಾಜಶೆಟ್ಟಿ ಹೊ ರತಪಡಿಸಿ ಬೇರಾರು ನಾಮಪತ್ರ ಸಲ್ಲಿ ಸದರಿಂದ ಅವರಿಬ್ಬರನ್ನು ಕ್ರಮವಾಗಿ ಅಧ್ಯಕ್ಷೆ ಉಪಾಧ್ಯಕ್ಷೆ ಎಂದು ಚುನಾವ ಣಾ���ಿಕಾರಿ ಘೋಷಿಸಿದರು. ಇವರಿಬ್ಬರಿ ಗೂ ಮಾಕವಳ್ಳಿ ಗ್ರಾಪಂ ಅಧ್ಯಕ್ಷೆ ವೀ ಣಾಅಶೋಕ್, ನಿರ್ದೆಶಕರಾದ ಇಂದ್ರ ಮ್ಮಸುಬ್ಬೇಗೌಡ, ಗಿರಿಜಾಪಾಲಕ್ಷ, ಸರಸ್ವ ತಿಚಂದ್ರೇಗೌಡ, ಭಾರತಿ ಮಂಜೇಶ, ಪ್ರಮೀಳ ಗಂಗೇಗೌಡ, ಜಯಮ್ಮ ತಿಮ್ಮ ಯ್ಯ ಗೌರಮ್ಮನಿಂಗೇಗೌಡ ಮುಂಖಡ ರಾದ ಮಹದೇವೆಗೌಡ (ಮಾಸ್ಟರ್), ಜಯರಾಮೇಗೌಡ, ಜಗದೀಶ್, ರಾ ಮೇಗೌಡ, ಚಲುವಪಣ್ಣ,ರಾಮೇಗೌಡ, ರಾಜೇಶ್, ರವಿಚಂದ್ರ, ಅಶೋಕ, ಮಂ ಜೇಗೌಡ, ರಂಗೇಗೌಡ ಅಭಿನಂದಿಸಿ ದರು. (at Krishnarajapete - K.R.Pete) https://www.instagram.com/p/Cbl9EPtrvTl/?utm_medium=tumblr
0 notes
ಸಂಬಂಧಿಗಳ ನಡುವೆ ಜಗಳ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿ. ಬಿ. ತಾಂಡಾದಲ್ಲಿ ಸಂಬಂಧಿಕರ ನಡುವೆ ಜಗಳ ಮಾಡಿಕೊಂಡಿರುವ ಘಟನೆ ನಡೆದಿದೆ. ಜಗಳದ ಹಿನ್ನೆಲೆಯಲ್ಲಿ 112 ಸಹಾಯ ವಾಣಿಗೆ ಕರೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ERSS ಅಧಿಕಾರಿಗಳು ಜಗಳವನ್ನು ಶಾಂತಗೊಳಿಸಿ ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಸ್ತಾಂತರಿಸಿದ್ದಾರೆ. (at Kudligi) https://www.instagram.com/p/Cbl8wQtPYSi/?utm_medium=tumblr
0 notes
ಬೆಂಗಳೂರು: ಮೊಬೈಲ್ನಲ್ಲೇ ಹೆಂಡತಿ ಮುಳುಗಿರುತ್ತಾಳೆ ಎಂದು ಚಾಕು ಇರಿದು ಕೊಂದ ಪತಿ ಹೆಂಡತಿ ಯಾವಾಗಲೂ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿರುತ್ತಾಳೆ ಎಂದು ಅನುಮಾನ ಪಟ್ಟು ಪತ್ನಿಯನ್ನೇ ಕೊಲೆಗೈದ ಘಟನೆ ಬೆಂಗಳೂರಿನ ರಾಮಮೂರ್ತಿನಗರದ ಚನ್ನಸಂದ್ರದಲ್ಲಿ ನಡೆದಿದೆ. ಕಮಲಾದೇವಿ ಕೊಲೆಯಾದ ದುರ್ದೈವಿ. ತೇಜ್ ಬಹದ್ದೂರ್ ಕೊಲೆ ಮಾಡಿದ ಆರೋಪಿ ಪತಿ. ನೇಪಾಳ ಮೂಲದ ದಂಪತಿ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಇಬ್ಬರ ನಡುವೆ ಇದೇ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಜೊತೆಗೆ ಹಂಡತಿ ಮೊಬೈಲ್ ನಲ್ಲಿ ಯಾವಾಗಲೂ ಮಾತನಾಡುತ್ತಿರುತ್ತಾಳೆ ಎಂದು ಅನುಮಾನಗೊಂಡಿದ್ದ. ನಿನ್ನೆಯೂ ಇದೆ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಚಾಕುವಿನಿಂದ ಇರಿದು ಆಕೆಯ ಹತ್ಯೆ ಮಾಡಿದ್ದಾನೆ. ರಾಮಮೂರ್ತಿನಗರ ಪೊಲೀಸರು ಪತಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. (at Bangalore, India) https://www.instagram.com/p/Cbl8SQWPZkH/?utm_medium=tumblr
0 notes
ಬೆಂಗಳೂರು: ವರ್ಕೌಟ್ ಮಾಡುವಾಗಲೇ ಕುಸಿದು ಬಿದ್ದು ಮಹಿಳೆ ಸಾವು. ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಲ್ಲೇಶ್ ಪಾಳ್ಯದಲ್ಲಿ ನಡೆದಿದೆ. ವಿನಯಾಕುಮಾರಿ(44) ಜಿಮ್ನಲ್ಲಿ ಕುಸಿದು ಸಾವನ್ನಪ್ಪಿದ ಮಹಿಳೆ. ವಿನಯಾಕುಮಾರಿಗೆ ಮದುವೆ ಆಗಿರಲಿಲ್ಲ. ಜಿಮ್, ಡ್ಯಾನ್ಸ್ ಮಾಡ್ಕೊಂಡಿದ್ದರು. ಅವರು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶ್ ಪಾಳ್ಯದಲ್ಲಿರುವ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ಸ್ಥಳೀಯರು ವಿನಯಾಕುಮಾರಿ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (at Bangalore, India) https://www.instagram.com/p/Cbl8CpNKdxx/?utm_medium=tumblr
0 notes
ಕಳಪೆ ಕಾಮಗಾರಿ; ಪರಿಶೀಲನೆ ಸೋಮಲಾಪುರ ಗ್ರಾಮದ ಹೊರವಲಯದಲ್ಲಿ ನಡೆದಿರುವ ಕಳಪೆ ಕಾಮರಿಗಾರಿಯ ಬಗ್ಗೆ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕುರುಗೋಡು ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮಲಾಪುರದಿಂದ ಹಾದು ಹೋಗುವ ಈ ರಸ್��ೆ ಯೋಜನೆಯಡಿ ಜಿ. ಪಂ. ಕಾಮಗಾರಿ ಪರಿಶೀಲಿಸಿದ ನಿರ್ಮಾಣವಾಗಿದ್ದು ತಹಶೀಲ್ದಾರ್ ಮೇಲ್ನೋಟಕ್ಕೆ ಕಳಪೆ ಕಾಮಗಾರಿ ಕಂಡುಬಂದಿದ್ದು ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು. (at Siruguppa) https://www.instagram.com/p/Cbl73cNvH1t/?utm_medium=tumblr
0 notes
ಮದ್ಯದ ಆಮಲಿನಲ್ಲಿ ಮಡದಿಯೊಂದಿಗೆ ಜಗಳ ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಸದಾಶಿವ ನಗರದಲ್ಲಿ ಗಂಡ ಕುಡಿದು ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಹಿಳೆಯೂ 112 ಸಹಾಯವಾಣಿಗಡ ಕರೆ ಮಾಡಿದ್ದು, ERSS ಸ್ಥಳಕ್ಕೆ ಭೇಟಿ ನೀಡಿ ತಿಳಿ ಹೇಳಿ ಸಮಸ್ಯೆ ಬಗೆಹರಿಸಿದ್ದು, ಸ್ಥಳೀಯ ಠಾಣೆಗೆ ಮುಂದಿನ ಕ್ರಮಕ್ಕೆ ಹಸ್ತಾಂತರಿಸಲಾಗಿದೆ. (at Siruguppa) https://www.instagram.com/p/CbkWLYbq5Rn/?utm_medium=tumblr
0 notes
ಮದ್ಯದ ಆಮಲಿನಲ್ಲಿ ಮಡದಿಯೊಂದಿಗೆ ಜಗಳ ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಸದಾಶಿವ ನಗರದಲ್ಲಿ ಗಂಡ ಕುಡಿದು ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಹಿಳೆಯೂ 112 ಸಹಾಯವಾಣಿಗಡ ಕರೆ ಮಾಡಿದ್ದು, ERSS ಸ್ಥಳಕ್ಕೆ ಭೇಟಿ ನೀಡಿ ತಿಳಿ ಹೇಳಿ ಸಮಸ್ಯೆ ಬಗೆಹರಿಸಿದ್ದು, ಸ್ಥಳೀಯ ಠಾಣೆಗೆ ಮುಂದಿನ ಕ್ರಮಕ್ಕೆ ಹಸ್ತಾಂತರಿಸಲಾಗಿದೆ. (at Siruguppa) https://www.instagram.com/p/CbkVp2jP9WD/?utm_medium=tumblr
0 notes
ಕಟ್ಟೆ ತೆರವಿಗೆ ವಿರೋಧ ಸಿರುಗುಪ್ಪ ನಗರದ 6 ನೇ ವಾರ್ಡ್ನ ದೇಶನೂರು ರಸ್ತೆಯಲ್ಲಿರುವ ಪ್ಯಾಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಶ್ರೀ ಗಾಂಧಮ್ಮ ಕಟ್ಟೆಯನ್ನು ನಗರಸಭೆಯ ಸಿಬ್ಬಂದಿ ತೆರವುಗೊಳಿಸುವುದಕ್ಕೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು. ತಾಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಕೆ. ಪಂಪಣ್ಣ ಮಾತನಾಡಿ, ತಲೆತಲಾಂತರದಿಂದ ಗಾಂಧಮ್ಮ ಕಟ್ಟೆ, ಗೌರಿಕಟ್ಟೆ, ನಾಗರಕಟ್ಟೆಯೆಂದು ಹಲವು ಹೆಸರುಗಳಿಂದ ಕರೆಯುವ ಈ ಕಟ್ಟೆಯ ಮೇಲಿರುವ ನಾಗರಕಲ್ಲಿಗೆ ಪ್ರತಿವರ್ಷ ನಾಗರಪಂಚಮಿಯಲ್ಲಿ ಹಾಲೆರೆಯಲಾಗುತ್ತದಲ್ಲದೆ ಗೌರಿಯ ಪ್ರತಿಮೆಯನ್ನಿಟ್ಟು ಹಬ್ಬವನ್ನು ಆಚರಿಸಲಾಗುತ್ತದೆ ಆದರೆ, ತಮ್ಮ ವ್ಯಾಪ್ತಿಗೆ ಈ ನಿವೇಶನ ಅಡ್ಡಿ ಬಾರದೆ ಇದ್ದರೂ ಕಟ್ಟೆಯ ಪಕ್ಕದಲ್ಲಿನ ಮನೆಯ ನಿವಾಸಿಯು ಅನಗತ್ಯವಾಗಿ ಪದೇ ಪದೆ ನೀಡುತ್ತಿರುವ ದೂರಿನ ಒತ್ತಡಕ್ಕೆ ಮಣಿದು ನಗರಸಭೆಯಿಂದ ತೆರವುಗೊಳಿಸಲು ಮುಂದಾಗಿರುವುದು ಧಾರ್ಮಿಕ ಧಕ್ಕೆಯಾಗುತ್ತದೆ ಈಗಾಗಲೇ ಬೃಹದಾಕಾರವಾಗಿ ಬೆಳೆದಿದ್ದ ಬೇವಿನ ಮರವನ್ನು ಕತ್ತರಿಸುವಾಗ ಕಟ್ಟೆಯು ಹಾಳಾಗಿತ್ತು. (at Siruguppa) https://www.instagram.com/p/CbkVREdPmeV/?utm_medium=tumblr
0 notes
ವಿಶ್ವಜಲ ದಿನಾಚರಣೆ ಪ್ರಕೃತಿ ದತ್ತವಾಗಿ ಸಿಗುವ ಮಳೆ ನೀರನ್ನು ಸರಿಯಾದ ರೀತಿಯಲ್ಲಿ ಮಿತವಾಗಿ ಬಳಸದೆ ನೀರಿನ ಅಭಾವವನು ಅನುಭವಿಸುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕೆಂದು ಜೆಎಂಎಫ್ಸಿ ನ್ಯಾಯಾ ಧೀಶ ಸಿ. ಎನ್. ಲೋಕೇಶ ಹೇಳಿದರು. ನಗರದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ವಿಶ್ವಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಕಾಂಕ್ರಿಟ್ ಮಯವಾಗಿದ್ದು ಮಳೆ ನೀರು ಇಂಗಲು ವಿಲ್ಲದಂತಾಗಿ ಅಂತರ್ಜಲ ನಶಿಸುತ್ತಿದೆ ಎಂದರು. (at Siruguppa) https://www.instagram.com/p/CbkVFaeqImm/?utm_medium=tumblr
0 notes
ಯುಗಾದಿ ಹಬ್ಬಕ್ಕೆ ಕೆಎಸ್ ಆರ್ ಟಿಸಿಯಿಂದ 600 ಹೆಚ್ಚುವರಿ ಬಸ್. ಯುಗಾದಿ ಹಬ್ಬದ ಸಂದರ್ಭ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್ ಆರ್ ಟಿಸಿ 600 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಎಸ್ ಆರ್ ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್, ಏಪ್ರಿಲ್ 2 ರಂದು ಯುಗಾದಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಏಪ್ರಿಲ್ ೧ ಹಾಗೂ 2ರಂದು ಬೆಂಗಳೂರಿನಿಂದ ರಾಜ್ಯ ಹಾಗು ಹೊರ ರಾಜ್ಯದ ವಿವಿಧ ಸ್ಥಳಗಳಿಗೆ 600 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಏಪ್ರಿಲ್ 4ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. (at Bangalore, India) https://www.instagram.com/p/CbkU4Uyq-IY/?utm_medium=tumblr
0 notes
ಮೂರ್ಮೂರು ಮದ್ಯೆ ಮಾಡಿಕೊಂಡ ಚಾಲಾಕಿ : ಮತ್ತೊಬ್ಬನೊಂದಿಗೆ ಇರುವಾಗ ಸಿಕ್ಕಿಬಿದ್ದು. ಮಹಿಳೆಯೊಬ್ಬಳು ಮೂರು ಮದುವೆಯಾಗಿದ್ದಲ್ಲದೆ, ಮೂವರು ಗಂಡಂದಿರಿಗೂ ಮೋಸ ಮಾಡಿ ಇನ್ನೊಬ್ಬ ವ್ಯಕ್ತಿ ಜೊತೆ ಇರುವಾಗ ರೆಡ್ ಹ್ಯಾಂಡ್ ಆಗಿ ಮೂರನೇ ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮೈಸೂರು ನಗರದ ಉದಯಗಿರಿಯ ನಿವಾಸಿಯಾಗಿರುವ ನಿಫಾ ಖಾನ್ ಎಂಬಾಕೆಯೇ ಮೂರು ಮದುವೆಯಾಗಿರುವ ಮಹಿಳೆ, ಚಾಲಾಕಿ ನಿಫಾ ಖಾನ್ ಟಿಂಡರ್ ಆ್ಯಪ್ ಮೂಲಕ ಹುಡುಗರನ್ನು ಪರಿಚಯ ಮಾಡಿಕೊಂಡು, ಬಲೆಗೆ ಬೀಳಿಸಿ ಮದುವೆಯಾಗುತ್ತಿದ್ದಳು ಎನ್ನಲಾಗಿದೆ. ನಿಫಾ ಖಾನ್ 2021ರಲ್ಲಿ ಮೈಸೂರಿನ ರಾಜೀವ್ ನಗರದ ಆಜಮ್ ಖಾನ್ ಎಂಬವರನ್ನು ಮದುವೆಯಾಗಿದ್ದಳು. ಅದಕ್ಕೂ ಮುನ್ನ ಈಕೆಗೆ ಎರಡು ಮದುವೆಯಾಗಿತ್ತು, ಅದನ್ನು ತಿಳಿಯದ ಹಾಗೆ ಮುಚ್ಚಿಟ್ಟಿದ್ದಳು. ಮದುವೆಯ ಬಳಿಕ ಚಾಟಿಂಗ್ ಮಾಡುತ್ತಿರುವುದು ಗಂಡ ಆಜಮ್ ಖಾನ್ ಗೆ ಗೊತ್ತಾಗಿದೆ. ಅಲ್ಲದೆ, ಈಕೆ ಬೇರೊಬ್ಬನ ಜೊತೆ ಇರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಳು. ಈ ಸಂಬಂಧ ಪತಿ ಆಜಮ್ ಖಾನ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ನಿಫಾ ಖಾನ್ ಮೂರು ಮದುವೆಯಾಗಿರುವುದು ಗೊತ್ತಾಗುತ್ತದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಮಹಿಳೆ ಇನ್ನೆಷ್ಟು ಯುವಕರಿಗೆ ಮೋಸ ಮಾಡಿದ್ದಾಳೆ ಎಂಬುವುದು ತಿಳಿದು ಬರಬೇಕಿದೆ. (at Mysore) https://www.instagram.com/p/CbebHnsLHtF/?utm_medium=tumblr
0 notes
ಸ್ಮಶಾನ ದಾರಿ ಬಂದ್ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ ಸಿರುಗುಪ್ಪ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿಯನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆನೀಡುತ್ತಿರುವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರಿಂದ ತಹಶೀಲ್ದಾರ್ ಎನ್. ಆರ್. ಮಂಜುನಾಥ ಸ್ವಾಮಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದ ಪಿ. ಮಾರೆಪ್ಪ ಮಾತನಾಡಿ, ಗ್ರಾಮದಲ್ಲಿ ಸ್ಮಶಾನಕ್ಕೆ ಹಲವು ತೆಲೆಮಾರುಗಳಿಂದ ಇದೇ ದಾರಿಯಲ್ಲಿ ಹೋಗುತ್ತಿದ್ದು, ಗ್ರಾಮದ ಕೆಲವರು ಸ್ಮಶಾನಕ್ಕೆ ಹೋಗುವ ದಾರಿಯನ್ನು ರದ್ದು ಮಾಡಿರುವುದರಿಂದ ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದಲ್ಲಿ ಶವಸಂಸ್ಕಾರಕ್ಕೆ ತೆರಳಲು ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಕಾರಣ ರಸ್ತೆಯನ್ನು ರದ್ದು ಮಾಡಿ ತೊಂದರೆ ನೀಡುತ್ತಿರುವವರ ಸಿರುಗುಪ್ಪತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಶಾನಕ್ಕೆ ಹೋಗುವ ದಾರಿಯನ್ನು ರದ್ದುಗೊಳಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರಿಂದ ತಹಸೀಲ್ದಾರ್ ಎನ್. ಆರ್. ಮಂಜುನಾಥಸ್ವಾಮಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಎನ್. ಆರ್. ಮಂಜುನಾಥಸ್ವಾಮಿ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಚಲವಾದಿ ಹುಸೇನಪ್ಪ, ಲಂಕೆಪ್ಪ, ವಿ. ಮಾರುತಿ, ಹನುಮಂತಪ್ಪ, ಸರ್ದಾರ್ ಸೇರಿ ಮತ್ತಿತರರು ಇತರರು ಇದ್ದರು (at Siruguppa) https://www.instagram.com/p/CbWui7OqJ8I/?utm_medium=tumblr
0 notes